1000ನೇ ಸಂಚಿಕೆಯತ್ತ ಜ್ಯೋತಿಷ ಮಿತ್ರ
ಪ್ರತಿ ಮನೆಯಲ್ಲೊಬ್ಬ ಜ್ಯೋತಿಷಿ ಇರಬೇಕೆಂಬ ಸತ್ಚಿಂತನೆಯೊಂದಿಗೆ ಕಳೆದ ಮೂರು ವರ್ಷಗಳ ಹಿಂದೆ ಆರಂಭವಾದ ಜ್ಯೋತಿಷ್ಯ ಮಿತ್ರ ಆನ್ಲೈನ್ ದಿನಪತ್ರಿಕೆಯು 1000ನೇ ಸಂಚಿಕೆಯತ್ತ ದಾಪುಗಾಲು ಇಡುತ್ತಿದೆ. ಜ್ಯೋತಿಷಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಮತ್ತು ಆಧ್ಯಾತ್ಮವನ್ನು ಜನಸಾಮಾನ್ಯರಿಗೆ ಅರ್ಥೈಸಲು "ಜೋತಿಷ ಮಿತ್ರ" ತಂಡ ಪ್ರಯತ್ನಿಸುತ್ತಿದೆ.ಆರಂಭದಲ್ಲಿ ಪತ್ರಿಕೆಯ ಬಗ್ಗೆ ಗಂಧ-ಗಾಳಿ ಗೊತ್ತಿಲ್ಲದಿದ್ದರೂ, ಹಲವರ ಸಲಹೆ - ಮಾರ್ಗದರ್ಶನದಿಂದಾಗಿ ತಪ್ಪುಗಳನ್ನು ತಿದ್ದಿಕೊಂಡು, ಸಂಚಿಕೆಯಿಂದ ಸಂಚಿಕೆಗೆ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡು ಹೊಸ ರೂಪವನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ……, ದೇಶ-ವಿದೇಶದಿಂದ ಪತ್ರಿಕೆಯ ಬಗ್ಗೆ ವಾಟ್ಸಪ್, ಫೇಸ್ಬುಕ್ ಮೂಲಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಯಾವುದೇ ಒಂದು ಸಂಸ್ಥೆ ಬೆಳವಣಿಗೆ ಹೊಂದಲು ಗುರುವಿನ ಆಶೀರ್ವಾದ ಇರಲೇ ಬೇಕು. ಪತ್ರಿಕೆಯ ಮೊದಲ ಸಂಚಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವಿರೇಂದ್ರ ಹೆಗ್ಗಡೆಯವರಿಗೆ ಕಳುಹಿಸಿಕೊಡಲಾಗಿತ್ತು. ಹೆಗ್ಗಡೆಯವರು ಪತ್ರಿಕೆಗೆ “ಯಶಸ್ವಿಯಾಗಲಿ” ಅಷ್ಟೇ ಅಲ್ಲದೆ “ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಇರಲಿ” ಎಂದು ಹಾರೈಸಿದರು.


ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಕಲಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಸಮಯಾವಕಾಶದ ತೊಂದರೆಯಿಂದ ವೈಜ್ಞಾನಿಕವಾಗಿ ಕಲಿಯಲು ಸಾಧ್ಯವಾಗದೆ ಇರುವುದನ್ನು ಗಮನಿಸಿದ “ಜ್ಯೋತಿಷ ಮಿತ್ರ” ಸಂಸ್ಥೆಯು ತಮ್ಮ ವೆಬ್ಸೈಟ್ ನಲ್ಲಿ (www.jyothishamithra.com) ಡಿಜಿಟಲ್ ತಂತ್ರಜ್ಞಾನದ ಮೂಲಕ ಜ್ಯೋತಿಷ ಶಾಸ್ತ್ರವನ್ನು ಕಲಿಯಲು ಅವಕಾಶವನ್ನು ಕಲ್ಪಿಸಿದೆ. ದೇಶ-ವಿದೇಶದ ಯಾವ ಮೂಲೆಯಲ್ಲಿದ್ದರೂ ಸರಿ,ಕನ್ನಡ ಓದಲು ಬರೆಯಲು ತಿಳಿದಿರುವ ಯಾರು ಬೇಕಾದರೂ ಜ್ಯೋತಿಷವನ್ನು ಕಲಿಯಬಹುದಾಗಿದೆ.

ಅತೀಂದ್ರಿಯ ವಿಜ್ಞಾನದಲ್ಲಿ ಆಸಕ್ತಿ ಇರುವವರಿಗೆ “ಜ್ಯೋತಿಷ ಮಿತ್ರ” ಸಂಸ್ಥೆಯು “ಪೆಂಡ್ಯೂಲಮ ಡೌಸಿಂಗ್ ಕಿಟ್ಟ್” ಹೊರತಂದಿದೆ. ಇದರಿಂದ ಭವಿಷ್ಯ,ವಾಸ್ತು,ಆರೋಗ್ಯ,ಹಣಕಾಸು,ವ್ಯವಹಾರ, ದಾಂಪತ್ಯ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ.
https://youtu.be/GOOZ0mCBSyg
ಜ್ಯೋತಿಷ್ಯ ಮಿತ್ರ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಆನ್ಲೈನ್ ಸೇವೆಗಳನ್ನು ನೀಡುತ್ತಿದೆ. ಜ್ಯೋತಿಷಶಾಸ್ತ್ರ, ಪ್ರಶ್ನಶಾಸ್ತ್ರ, ಸಂಖ್ಯಾಶಾಸ್ತ್ರ, ವಾಸ್ತ್ರುಶಾಸ್ತ್ರಕ್ಕೆ ಸಂಬಂಧಿಸಿದ ಸಲಹೆ ಮತ್ತು ಪರಿಹಾರವನ್ನು 9986671473 ಸಂಖ್ಯೆಗೆ ಕರೆಮಾಡಿ ತಿಳಿದುಕೊಳ್ಳಬಹುದಾಗಿದೆ.

ಬನ್ನಿ….. ನಮ್ಮ ಜೊತೆ ಕೈಜೋಡಿಸಿ……. ಒಟ್ಟಾಗಿ ನಮ್ಮ ಈ ಸನಾತನ ಸತ್ ಚಿಂತನೆಯನ್ನು ವಿಶ್ವ ವ್ಯಾಪಿಯಾಗಿಸೋಣ ಅದುವೇ…..
“ವಸುಧ ಏವ ಕುಟುಂಬಕ”
