ನಿತ್ಯ ಪಂಚಾಂಗ

ದೃಷ್ಟಿ ದೋಷಕ್ಕೆ ಪರಿಹಾರ

6589

ನಿಂಬೆ ಹಣ್ಣು ದೃಷ್ಟಿ ದೋಷವನ್ನು, ಕೆಟ್ಟ ಶಕ್ತಿಗಳನ್ನು  ತೊಲಗಿಸುವ  ಮಹಾಶಕ್ತಿ  ನಿಂಬೆ ಹಣ್ಣಿನಲ್ಲಿ  ಇದೆ. ಅದೇ ಕಾರಣಕ್ಕೆ  ವ್ಯಾಪಾರಿಗಳು  ಇದನ್ನು ಅಂಗಡಿಗಳ ಮುಂದೆ ನೇತು ಹಾಕಿರುತ್ತಾರೆ .ಮಂತ್ರ ತಂತ್ರಗಳಂತಹ ದುಷ್ಟ  ಮತ್ತು ನಕಾರಾತ್ಮಕ   ಶಕ್ತಿಗಳನ್ನು  ನಾಶ ಮಾಡಲು  ನಿಂಬೆಹಣ್ಣು   ತುಂಬ  ಪ್ರಮುಖ  ಪಾತ್ರ   ವಹಿಸುತ್ತದೆ. ಗುರುವಾರದ ದಿನ  ಅಂಜನೇಯಸ್ವಾಮಿ  ದೇವಸ್ಥಾನಕ್ಕೆ ನಾಲ್ಕು ನಿಂಬೆಹಣ್ಣು ಮತ್ತು ಲವಂಗ ವನ್ನು ತೆಗೆದುಕೊಂಡು ಹೋಗಿ ಕೊಟ್ಟು ಪೂಜೆ ಮಾಡಿಸಿ ಬಂದರೆ ದೃಷ್ಟಿ ದೋಷ ನಿವಾರಣೆ ಆಗುತ್ತದೆ.

4558

ವ್ಯಾಪಾರ ನಷ್ಟದಲ್ಲಿ  ಸಾಗುತ್ತಿದ್ದರೆ  ಒಂದು  ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು ನಾಲ್ಕು ಮೂಲೆಗಳಿಗೂ ಒಂದೊಂದು ಬಾರಿ ಮುಟ್ಟಿಸಿ  ನಂತರ ನಿಂಬೆಹಣ್ಣನ್ನು ನಾಲ್ಕು ತುಂಡುಗಳಾಗಿ  ಮಾಡಿ ನಾಲ್ಕು ದಿಕ್ಕಿನಲ್ಲಿ ಇಡಬೇಕು. ಇದರಿಂದ ದೃಷ್ಟಿದೋಷ  ದೂರವಾಗುತ್ತದೆ.

7895

ಕಣ್ಣಿನ ದೃಷ್ಟಿ ಬಿದ್ದರೆ  ಅವರಿಗೆ  ಒಂದು  ನಿಂಬೆಹಣ್ಣಿನಿಂದ   ಕೆಳಗಿನಿಂದ  ಮೇಲಕ್ಕೆ   ಮತ್ತೆ  ಮೇಲಿನಿಂದ   ಕೆಳಗೆ  ಮೂರು  ಬಾರು ನಿವಾಳಿಸಿ  ನಿಂಬೆಹಣ್ಣನ್ನು  ನಾಲ್ಕು ಹೋಳಾಗಿ ಕತ್ತರಿಸಿ ಯಾರು ಇಲ್ಲದ ಜಾಗದಲ್ಲಿ ಮೂರು ದಾರಿ ಕೂಡಿರುವ ಸ್ಥಳದಲ್ಲಿ ಯಾರಿಗೂ  ಕಾಣಿಸದಂತೆ ಎಸೆದು ಹಿಂದೆ ತಿರುಗಿ ನೋಡದೆ ಬಂದುಬಿಡಿ.

63554

ನಿಮ್ಮ   ಮನೆಯ  ಮುಂದೆ  ಒಂದು  ನಿಂಬೆಹಣ್ಣಿನ  ಗಿಡ  ಇದ್ದರೆ  ಅದು  ದುಷ್ಟ  ಶಕ್ತಿಯನ್ನು ಮನೆಯ ಹತ್ತಿರ ಸುಳಿಯದಂತೆ   ಮನೆಯನ್ನು, ಮನೆಯಲ್ಲಿ  ವಾಸಿಸುವರನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ ಒಂದು ನಿಂಬೆ ಹಣ್ಣಿನ ಗಿಡ ಮನೆಯಲ್ಲಿ, ಯಾವುದೇ ಕಚೇರಿಯಂತಹ ಸ್ಥಳದಲ್ಲಿ ವಾಸ್ತು ದೋಷಗಳು ಇದ್ದಲ್ಲಿ ಅವುಗಳನ್ನು ದೂರವಾಗಿಸುತ್ತದೆ.

555

9354

88585